ಬೆಂಗಳೂರು : ಇಂದಿನಿಂದ ಮುಂದಿನ ಮೂರು ದಿನಗಳ ವರೆಗೆ ಬೆಂಗಳೂರಿಗೆ ಬರುವ ಕೆಲವು ರೈಲುಗಳ ಸೇವೆಯನ್ನು ರದ್ದು ಮಾಡಲಾಗಿದೆ. ಹಲವುಕಡೆಗಳಲ್ಲಿ ರೈಲ್ವೆ ತುರ್ತು ಕಾಮಗಾರಿ ನಡೆಯುತ್ತಿರುವ ಕಾರಣ ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಬರುವ ರೈಲುಗಳನ್ನು ಸ್ಥಗಿತ ಮಾಡಲಾಗಿದ್ದು, ಇಂದಿನಿಂದ (ಮೇ 29) ಮೇ 31ರವರೆಗೆ ರದ್ದು ಮಾಡಲಾಗಿದೆ.
ರಾಜ್ಯ ಸೇರಿದಂತೆ ಇತರ ಕಡೆಗಳಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಈ ಗಾಗಲೇ ರದ್ದಾಗಿರುವ ರೈಲುಗಳ ಕುರಿತ ಮಾಹಿತಿ ಪಡೆದು ಕೊಳ್ಳುವುದಕ್ಕೆ ರೈಲ್ವೆ ಇಲಾಖೆ ಮನವಿ ಮಾಡಿಕೊಂಡಿದೆ. ರೈಲ್ವೆ ಮಾರ್ಗಗಳಲ್ಲಿ ವಾರ್ಷಿಕ ಕೇಬಲ್ ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದರಿಂದ ಬೈಯ್ಯಪ್ಪನಹಳ್ಳಿ ವೆಸ್ಟ್ ಕ್ಯಾಬಿನ್ ಮತ್ತು ಬೈಯ್ಯಪ್ಪನಹಳ್ಳಿ-ಸರ್ ಎಂ.ವಿಶೇಶ್ವರಯ್ಯ ಟರ್ಮಿನಲ್ ನಡುವೆ ಇಂದು ಮೂರು ಮೆಮು ರೈಲುಗಳು ರದ್ದುಗೊಳ್ಳಲಿವೆ. ನೈರುತ್ಯ ರೈಲ್ವೆ ಮಾಹಿತಿ ಪ್ರಕಾರ ಒಟ್ಟು ಎಂಟು ಮೆಮು ರೈಲುಗಳು ಭಾಗಶ: ರದ್ದಾಗಿವೆ.
ಇದರೊಂದಿಗೆ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವುದರಿಂದ ಭಟ್ಕಳ ನಿಲ್ದಾಣದಲ್ಲಿ ಮೇ 29 ರಿಂದ 31 ರವರೆಗೆ ಕೆಲವು ರೈಲುಗಳನ್ನು ಭಾಗಶ: ರದ್ದುಗೊಳ್ಳಲಿವೆ ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ. ಮೂರು ವಿಶೇಷ ಮೆಮು ರೈಲು ರದ್ದು: ರೈಲು ಸಂಖ್ಯೆ (01799) ವೈಟ್ಫಿಲ್ಡ್-ಕೆಎಸ್ಆರ್ ಬೆಂಗಳೂರು ವಿಶೇಷ ಮೆಮು ರೈಲು, ಕೆಎಸ್ಆರ್ ಬೆಂಗಳೂರು-ಬಂಗಾರಪೇಟ (06561) ಮತ್ತು ಬಂಗಾರಪೇಟ-ಕೆಎಸ್ಆರ್ ಬೆಂಗಳೂರು (01773) ವಿಶೇಷ ಮೆಮು ರೈಲು ಬುಧವಾರ (ಮೇ 29) ತಾತ್ಕಾಲಿಕವಾಗಿ ರದ್ದಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
*ಕೆಎಸ್ಆರ್ ಬೆಂಗಳೂರು-ಬಂಗಾರಪೇಟ ಮೆಮು ವಿಶೇಷ ರೈಲು ಸಂಖ್ಯೆ (06389) ಕೆಎಸ್ಆರ್ ಬೆಂಗಳೂರು-ವೈಟ್ಫಿಲ್ಟ್ ನಡುವೆ ಭಾಗಶ: ರದ್ದಾಗಲಿದೆ.
*ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ಮೆಮು ವಿಶೇಷ ರೈಲು ಸಂಖ್ಯೆ (06535) ಯಲಹಂಕ-ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶ: ರದ್ದಾಗಲಿದೆ.
*ಮರಿಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ಸಂಖ್ಯೆ (01776) ಕೆಎಸ್ಆರ್ ಬೆಂಗಳೂರು-ಕೃಷ್ಣರಾಜಪುರಂ ಮಧ್ಯೆ ಭಾಗಶ: ರದ್ದಾಗಲಿದೆ.
*ಕೆಎಸ್ಆರ್ ಬೆಂಗಳೂರು-ಮರಿಕುಪ್ಪಂ ಮೆಮು ವಿಶೇಷ ರೈಲು ಸಂಖ್ಯೆ (01775) ಕೆಎಸ್ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ ಭಾಗಶ: ರದ್ದಾಗಲಿದೆ.
*ಮರಿಕುಪ್ಪಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು ಸಂಖ್ಯೆ (01793) ಬಂಗಾರಪೇಟ-ಕೃಷ್ಣರಾಜಪುರಂ ನಡುವೆ ಭಾಗಶ: ರದ್ದಾಗಲಿದೆ.
*ಕೃಷ್ಣರಾಜಪುರಂ-ಮರಿಕುರಪ್ಪಂ ಮೆಮು ವಿಶೇಷ ರೈಲು ಸಂಖ್ಯೆ (01794) ಕೃಷ್ಣರಾಜಪುರಂ-ಬಂಗಾರಪೇಟ ನಡುವೆ ಭಾಗಶ: ರದ್ದಾಗಲಿದೆ.
*ಕೆಎಸ್ಆರ್ ಬೆಂಗಳೂರು-ಕುಪ್ಪಂ ಮೆಮು ವಿಶೇಷ ರೈಲು ಸಂಖ್ಯೆ (06529) ಕೆಎಸ್ಆರ್ ಬೆಂಗಳೂರು-ಕೃಷ್ಣರಾಜಪುರಂ ನಡುವೆ ಭಾಗಶ: ರದ್ದಾಗಲಿದೆ.
*ರೈಲು ಸಂಖ್ಯೆ 16585 ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸಪ್ರೆಸ್ ರೈಲು ಶಿರೂರು ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಈ ರೈಲು ಮೇ 29ರಂದು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುತ್ತದೆ. ಶಿರೂರು-ಮುರುಡೇಶ್ವರ ನಿಲ್ದಾಣಗಳ ನಡುವೆ ಭಾಗಶ: ರದ್ದಾಗಲಿದೆ.
*ರೈಲು ಸಂಖ್ಯೆ 16586 ಮುರುಡೇಶ್ವರ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸಪ್ರೆಸ್ ರೈಲು ಮೇ 30ರಂದು ಶಿರೂರು ನಿಲ್ದಾಣದಿಂದ ಮಧ್ಯಾಹ್ನ 2.35 ಗಂಟೆಗೆ ಪ್ರಾರಂಭವಾಗಲಿದ್ದು, ಮುರುಡೇಶ್ವರ ಮತ್ತು ಶಿರೂರು ನಿಲ್ದಾಣಗಳ ನಡುವೆ ಭಾಗಶ: ರದ್ದಾಗಲಿದೆ
Publisher: ಕನ್ನಡ ನಾಡು | Kannada Naadu